Mar 14, 2012
Feb 6, 2012
Dec 21, 2011
"ತಲ್ಲಣ"
¥Á¼ÀÄ ©¢ÝvÉÆAzÀÄ Nt ºÀ½îAiÉÆ¼ÀUÉ
ºÀ¼ÉAiÀÄ ªÀÄtÂÚ£À ªÀÄ£ÉUÀ¼ÀÄ DAiÀÄvÀ¦à ªÀÄuÁÚVªÉ
E°, ºÉUÀÎt, ºÁªÀÅUÀ¼ÀÄ ªÀÄ£ÀĵÀågÀAvÉ NqÁrPÉÆArªÉ
CPÀÌ-¥ÀPÀÌzÀ PÉ®ªÀÅ UÀnÖªÀÄÄmÁÖzÀ ªÀÄ£ÉUÀ½UÀÆ ®UÉάÄnÖªÉ
C¤jÃQëvÀ £ÉʸÀVðPÀ zÁ½UÉ ¥ÀƪÀð vÀAiÀiÁj¬Ä®èzÉ,
MmÁÖgÉ ¥Á¼ÀÄ ©¢ÝvÉÆAzÀÄ Nt ºÀ½îAiÉÆ¼ÀUÉ
vÁ®ÆPï D¦üûù¤AzÀ §AzÀ ¥ÀjºÁgÀ ZÀlUÀ¼À ¥Á¯Á¬ÄvÀÄ
D¸ÉAiÀÄ ¨É£ÀßwÛ vÀAzÀ PÀrªÉÄ PÁé°n gÉñÉä ¹ÃgÉ ºÀjzÀÄºÉÆÃ¬ÄvÀÄ
©¹®Ä, ªÀļÉ, UÁ½, ºÀUÀ®Ä-gÁwæAiÀİ UÀzÉÝV½AiÀÄzÉ ºÁ¹UÉAiÀİ
¨ÉªÀgÀĪÀ dqÀUÀnÖzÀ zÉúÀ ±ÁmïðPÀmï zÁj ºÀÄqÀÄPÀ¯ÁgÀA©ü¹vÀÄ
§AzÀªÀ£ÀÄ PÁAQæÃmï PÁr£À°è PÀPÁÌ©QÌ
«®PÀëtªÁzÀ ªÀiÁqÀæ£ï ¯ÉÊ¥sóï ¸ÉÖöʰUÉ
FUÀ vÁ£É ªÉƯɺÁ®Ä ©lÖ ªÀÄPÀ̼ÀÄ PÀAUÁ®Ä
¤UÀðwPÀ C¯ÉªÀiÁjAiÀÄAvÉ ¥sóÀÄmï¥Áw£À mÁ¥Àð°£ï UÀÄr¸À®°è
ªÀÄ®VzÀgÉ ºÉÆgÀUÉ PÁtĪÀ ªÀÄÄAUÁ®Ä
¥sóÁåµÀ£ï zɪÀé CªÀÄjPÉÆAqÀ ºÀÄqÀÄV vÉÆj¸ÀĪÀ ZÀrØ-¨ÁæUÀ¼À
£ÉÆÃrzÁUÀ ºÀ¸ÀÛªÉÄÊxÀÄ£ÀPÀÆÌ ¥Éæöʪɹ¬Ä®èzÀ VfVf
¯ÉÆÃ ªÉøïÖ ¥ÁåAlÄUÀ½UÉ ¸ÉÆAl PÀ¼ÉzÀÄPÉÆÃAqÀ UÀAqÀÄ
vÉÆqɬĮèzÀ ºÀÄqÀÄUÀ¤UÉ ¸ÉgÀUÀÄ ºÁ¹zÀÄÝ ¥ÁvÉæ vÉÆ¼ÉAiÀÄ®Ä ºÉÆÃzÀ ªÀÄ£ÉAiÀİè
UÀÄr¸À® ªÀÄÄAzÉ PÉÊºÉÆvÀÄÛ PÀÆvÀ §wÛ ºÉÆÃzÀ ªÀÄÄzÀÄQAiÀÄ C¸ÀàµÀÖ
PÀtÄÚUÀ¼À°è ¹A§¼À MgɹPÉÆ¼ÀîzÉ DqÀÄwÛzÀÝ ªÀÄPÀ̼À §zÀÄPÀÄ ZɯÁ覰è
G¥ÀAiÉÆÃV¹ ©lÖ ²y® ¸ÀƼÉAiÀÄAvÀ ªÉÄʬĮèzÀ ªÀÄ£ÉUÀ¼À
C¹Ü¥ÀAdgÀzÀ £ÀqÀĪÉ, ¸ÀA§æªÀÄzÀ ¥À¼ÉAiÀÄĽPÉAiÀÄAvÀ PÀA§UÀ¼ÀÄ E£ÀÆß fêÀAvÀ
ºÀ½îAiÀiÁV G½AiÀÄzÀ ºÀ½îAiÀÄ ¸ÀA¢UÉÆA¢UÀ¼À°è ¸Àä±Á£À ªÀiË£À
PÀuÉÚzÀÄjUÉ PÀAqÀ ªÉʨsÀªÀ PÀ¼ÉzÀÄºÉÆÃzÀ ªÉÄÃ¯É G½zÀzÀÄÝ ªÀiÁvÁqÀzÀ ªÀiË£À
(After reading this poem my brother Dinakar Moger sent above photo, Thanks Anna )
=====
=====
Nov 5, 2011
Oct 28, 2011
Sep 28, 2011
"ಅಪ್ಪ-ಅಮ್ಮ & SEX"
Sep 4, 2011
'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು' ಹಾಗಂತಲೇ ಶುರುವಾಗುತ್ತಿತ್ತು ಮಾತು.
ಆ ದಿನಕ್ಕಿಂತ ಒಂದು ವಾರ ಮೊದ್ಲೇ ಒಬ್ಬ ಸ್ಟುಡೆಂಟ್ ಇಷ್ಟು ಹಣವನ್ನ ಕೊಡ್ಬೇಕು ಅಂತ ಕ್ಲಾಸ್ ನ ಸ್ಟುಡೆಂಟ್ representative announce ಮಾಡಿರ್ತಿದ್ದ. ಸರಿ, ಎಲ್ಲರು ಕೊಟ್ಟಾದಮೇಲೆ; ಮೊದಲೇ ಅಂದುಕೊಂಡ ಹಾಗೆ ಬಣ್ಣ ಬಣ್ಣದ paper cuttings, ಥರ್ಮೊಕೊಲ್, ಗಮ್ ಮತ್ತು decorationಗೆ ಬೇಕಾದ ಎಲ್ಲಾ ವಸ್ತುಗಳು ತರುವ ಕೆಲಸ.
ಪ್ರತಿ ದಿನ ಸಂಜೆ ಗುಂಪು ಗುಂಪಾಗಿ ಮಾರ್ಕೆಟ್ ಗೆ ಹೋಗಿ ನಮಗೆ ಬಂದಷ್ಟು ಚೌಕಾಸಿ ಮಾಡಿ ಆ ವಸ್ತುಗಳನ್ನ ತರ್ತಾಯಿದ್ವಿ . ನಾವು ಹೇಗೆ ಖರೀದಿ ಮಾಡ್ತಾಯಿದ್ವಿ ಅನ್ನೋದನ್ನ ನೆನಸಿಕೊಂಡ್ರೆ ಈಗ್ಲೂ ನಗು ಬರುತ್ತೆ. 'ಏ, ನಮ್ಮನೆ ಹತ್ರ ಅದು ಸಿಗುತ್ತೆ ಅಲ್ಲೇ ತೊಗೊಳೋಣ', 'ಏ ಇದು ನನ್ನ ಅಂಕಲ್ ಹತ್ರ ಇದೆ ನಾನೇ ತರ್ತೀನಿ ಬಿಡು' ಇಂತಹ ಮಾತುಗಳಲ್ಲಿ ವ್ಯಾಪಾರ ಮುಗೀತಿತ್ತು. ಒಂದು ವಸ್ತು ತರಲಿಕ್ಕೆ ಹೋದ್ರೆ ಎಂಟು-ಹತ್ತು ಜನ ಹೋಗ್ತಾಯಿದ್ವಿ. ಮಾರ್ಕೆಟ್ ನಲ್ಲಿ ಸಿಗೋದನ್ನ ಬಿಟ್ಟು ಅದೇ ವಸ್ತುವನ್ನ ಎಲ್ಲೋ ಗೆಳೆಯನ ಮನೆ ಹತ್ರ ಇರೋ ಚಿಕ್ಕ ಅಂಗಡಿಯಲ್ಲಿ ಖರೀದಿ. ಹುಡುಗಿಯರದು ಅಲಂಕಾರಕ್ಕೆ ಬೇಕಾದ ಬಣ್ಣ ಬಣ್ಣದ ರಂಗೋಲಿ ಪುಡಿ, ಸೀರೆಗಳನ್ನ ಮನೆಯಿಂದ ತರುವ department.
'ನೀನು ನಿರೂಪಣೆ ಮಾಡು, ಮಾಡ್ತಿಯ ತಾನೇ ?'
ಹೀಗೆ ಎಲ್ಲಾ ಕೆಲಸವನ್ನ ಹಂಚಿಕೊಂಡು ಶ್ರದ್ದೆಯಿಂದ ಮಾಡಿಯಾದ ಮೇಲೆ ಆ ದಿನ ಬರುತ್ತಿತ್ತು, ಆ ಮಾತು ಕೂಡ : 'ಇವತ್ತು ಸಂಜೆ ಕ್ಲಾಸ್ ಮುಗದ್ ಮೇಲೆ ಪ್ರಿನ್ಸಿಪಾಲ್ ಹತ್ರ permission ತೊಗೋಬೇಕು'. standing in-front of principal is always tough job. ಗುಂಪಾಗಿ ಎಲ್ಲರು ಪ್ರಿನ್ಸಿಪಾಲ್ ರೂಮ್ ಹತ್ರ ಹೋಗಿ ನಿಂತು 'ಏ ನೀ ಹೋಗು' , 'ಏ ನೀನೆ ಹೋಗೋ' ಅಂತ ಗುಸು ಗುಸು ಅಂತಿದ್ವಿ.
ಕೆಲವೊಬ್ಬರು ಸ್ವಲ್ಪ ಗಟ್ಟಿ ಧೈರ್ಯ ಮಾಡಿ ಪ್ರಿನ್ಸಿಪಾಲ್ ರೂಮಿನ ಮುಂದೆ ನಿಂತು
'ಮೇ ಐ ಕಮ್ ಮ್ಯಾಮ್ / ಸರ್' ಅನ್ನುವಷ್ಟರಲ್ಲಿ ಜೀವ ಹಾರಿ ಹೋದ ಅನುಭವ.
'ಯೆಸ್' ಅದೇ ಗಂಭೀರ ದನಿ. ಒಳಗೆ ಹೋದ ಮೇಲೆ ಯಾರಿಗೂ ಉಸಿರು ಅಷ್ಟು ಸಲೀಸಾಗಿ ಹೊರ ಬರುತ್ತಿರಲಿಲ್ಲ. ಹೊರಗೆ ನಿಂತವರಿಗೆ ಆ ರೂಮಿನಿಂದ ಏನೋ ವಿಸ್ಮಯ ಹೊರಬರಲಿದೆಯೇನೋ ಅನ್ನುವಷ್ಟು ಕಾತುರ.
ಪ್ರಿನ್ಸಿಪಾಲ್ ಕೇಳೋದು 'ಏನ್ರೋ?'
'ನಾಳೆ. . . ನಾಳೆಗೆ ಕ್ಲಾಸ್ ರೂಮ್ decorate ಮಾಡ್ಬೇಕು. ಅದಕ್ಕೆ, '
'ಅದಕ್ಕೆ ?'
'ಕ್ಲಾಸ್ ರೂಮ್ ಕೀ ಬೇಕಿತ್ತು'
ಯಾವ ಕ್ಲಾಸ್, ಯಾವ ಸೆಕ್ಷನ್, ಯಾರು ಕ್ಲಾಸ್ ಟೀಚರ್ ಎಲ್ಲಾ ಕೇಳಿದ ಮೇಲೆ 'ಓಕೆ' - permission granted.
ಅವತ್ತಿನ ದಿನದ requestನ್ನ ಯಾರೇ ಪ್ರಿನ್ಸಿಪಾಲ್ ಆಗಿದ್ರು ಅವ್ರು 'ನೋ' ಅನ್ನಲ್ಲ. ಆದರೂ ನಮಗೆ ಪ್ರತಿ ವರ್ಷ ಪ್ರಿನ್ಸಿಪಾಲ್ ರೂಮ್ ಮುಂದೆ ನಿಂತಾಗ ಹೆದರಿಕೆ ಆಗುತಿತ್ತು ಅನ್ನೋದು ಸುಳ್ಳಲ್ಲ.
ಎಲ್ಲಾ ಹುಡುಗ ಹುಡುಗಿಯರು ಸೇರಿ ಕ್ಲಾಸ್ ರೂಮಿನ ಅಲಂಕಾರ ಮಾಡಲು ಶುರು ಮಾಡುತ್ತಿದ್ದೆವು, ಏಳು ಗಂಟೆಯ ನಂತರ ಅದೇ ಊರಿನವರು ಮನೆಗೆ ಹೋಗ್ತಾಯಿದ್ರು. ನಾವು ಹಾಸ್ಟೆಲ್ ಹುಡುಗರು- ನೈಟ್ ಡ್ಯುಟಿ. ಮಧ್ಯರಾತ್ರಿವರೆಗೂ ಅಲಂಕಾರ: ಪಕ್ಕದ ಕ್ಲಾಸ್ ರೂಮಿನವರು ಏನ್ ಮಾಡ್ತಿದಾರೆ, ಎಷ್ಟು ಕೆ.ಜಿ ಕೇಕ್ ಆರ್ಡರ್ ಮಾಡಿದಾರೆ . . .ಇಂತವುಗಳ ಬಗ್ಗೆ discussion ಕೂಡ ನಡೆಯುತ್ತಿತ್ತು. decoration ಎಲ್ಲಾ ಮುಗೀತು ಅಂದುಕೊಳ್ಳುವಷ್ಟರಲ್ಲಿ 'ಬ್ಲ್ಯಾಕ್ ಬೋರ್ಡ್ ಮೇಲೆ ಬಣ್ಣದ ಚಾಕ್ ಪೀಸ್ ಗಳಿಂದ design ಮಾಡ್ಬೇಕು, sayings ಬರೀಬೇಕು, class teacher ಹೆಸರು ಬರೀಬೇಕು'. ಅಯ್ಯೋ ಮುಗೀತು ಅಂದ್ರೆ ಇನ್ನೂ ಕೆಲಸ ಇದೆ. 'ಬೇಗ ಮಲಗ್ರೋ ಬೆಳಗ್ಗೆ ಬೇಗ ಮಾರ್ಕೆಟ್ ಗೆ ಹೋಗಿ ಹೂವು ತರ್ಬೇಕು, ಬೇಕರಿಯಿಂದ snacks, ಕೇಕ್ ತರ್ಬೇಕು'.
ಈ ಎಲ್ಲಾ ಗಲಿಬಿಲಿ, ಸಂತಸ, ಹರಟೆ, amateur ಆದ ವ್ಯಾಪಾರ, ಪಕ್ಕದ ಕ್ಲಾಸ್ ನವರ ಜೊತೆ competition ಗಳ ದಾಟಿಕೊಂಡು 'ಬೆಳಕಿನೊಂದಿಗೆ' ಬಂದುಬಿಡುತ್ತೆ ಆ ದಿನ "September 5". ಅದೊಂದು ವಿದ್ಯಾರ್ಥಿ ಜೀವನದ ಮರೆಯಲಾಗದ ಪ್ರೀತಿಯ ದಿನ "ಶಿಕ್ಷಕರ ದಿನ". ಪ್ಲೇ ಗ್ರೌಂಡಿನಲ್ಲಿ 'HAPPY TEACHERS DAY' ಅಂತ ಜೋರಾಗಿ ಕೂಗುವುದರೊಂದಿಗೆ(ಕಿರುಚುವುದರೊಂದಿಗೆ) ಶುರುವಾಗುತ್ತಿತ್ತು ಸಂಬ್ರಮ. ಅಷ್ಟು ಜೋರಾಗಿ ಗ್ರೌಂಡಿನಲ್ಲಿ ಕಿರುಚಿದರೂ ಪ್ರಿನ್ಸಿಪಾಲ್ ಒಮ್ಮೆಯೂ ಬೈದಿಲ್ಲ. ಸುಮ್ನೆ ನಿಂತು ನೋಡಿ, ನಕ್ಕು ಹೋಗುತ್ತಿದ್ದರು, ಅದೇ ಬೇರೆ ದಿನ ಆಗಿದ್ರೆ, ಬೇರೆ ಏನಾದ್ರೂ ಕಿರುಚಿದ್ರೆ ? (ಯಪ್ಪಾ, ಬದುಕೋದು ಉಂಟೆ ?)
ಅವತ್ತಿನ ದಿನದ ಸಂಬ್ರಮವೇ ಸಂಬ್ರಮ . . . ಮೊದಲು auditorium ನಲ್ಲಿ ಕಡಿಮೆ ಅಂದ್ರು ಎರಡು ತಾಸುಗಳ ಕಾರ್ಯಕ್ರಮ ಶಾಲೆಯ ಎಲ್ಲರು ಅಲ್ಲಿರ್ತಾರೆ. ನಂತರ ಅವರವರ ಕ್ಲಾಸ್ ನಲ್ಲಿ celebration, ಕ್ಲಾಸ್ ಟೀಚರಿಂದ ಕೇಕ್ ಕತ್ತರಿಸುವ ಘಳಿಗೆಯಂತೂ ಎಲ್ಲರ ಕಣ್ಣಲ್ಲಿ ಚಕ್ ಚಕ್ ಅಂತ ಕ್ಲಿಕ್ ಆಗ್ತಿತ್ತು(9th standard ವರೆಗೆ ನಮ್ಮ ಹತ್ರ ಕ್ಯಾಮರ ಇರ್ಲಿಲ್ಲ). ಅದೃಷ್ಟಕ್ಕೆ 10th standard celebration ಫೋಟೋಸ್ ನನ್ನತ್ರ ಇವೆ. ಕೆಲವರು ಶಾಲೆಯ ಬಗ್ಗೆ, ಟೀಚರ್ಸ್ ಬಗ್ಗೆ ಒಪಿನಿಯನ್ ಹೇಳ್ತಾಯಿದ್ರು, ನಂತರ ಕೆಲ ಟೀಚರ್ಸ್ ಮಾತಡ್ತಾಯಿದ್ರು ಕೊನೆಗೆ ಕ್ಲಾಸ್ ಟೀಚರ್ (ಎಲ್ಲರವು positive opinion). ನಮಗೆ subject handle ಮಾಡಿದ ಟೀಚರ್ಸ್ ಗೆ ನೆನಪಿನ / ಗೌರವದ ಕಾಣಿಕೆಯಾಗಿ ಪುಸ್ತಕಗಳನ್ನ ಕೊಡ್ತಾಯಿದ್ವಿ. ಆ ನಡುವೆ ಪ್ರಿನ್ಸಿಪಾಲ್ ಎಲ್ಲಾ ಕ್ಲಾಸ್ ಗಳನ್ನ ವಿಸಿಟ್ ಮಾಡ್ತಾಯಿದ್ರು. ಆಹಾ, ಖುಷಿಯೋ ಖುಷಿ.
ನಾವು ಹಾಸ್ಟೆಲ್ ಹುಡುಗರು ವಾರ್ಡನ್ ಗಳಿಗೆ ವಿಶ್ ಮಾಡಿ, ರಾತ್ರಿ ಊಟದ ಮುಂಚಿನ ಪ್ರಾರ್ತನೆಯ ಕೊನೆಗೆ ಅವರಿಗೆ 'ಥ್ಯಾಂಕ್ಸ್' ಹೇಳ್ತಾಯಿದ್ವಿ (ನಮ್ಮನ್ನ ವರ್ಷಾನುಗಟ್ಟಲೆ ಸಹಿಸಿಕೊಂಡಿದ್ದಕ್ಕೆ).
ಎಷ್ಟು ಚೆಂದದ ದಿನಗಳವು, ನನ್ನಲ್ಲಿ ಇನ್ನೂ ಹಸಿ ಹಸಿ . . . ನೆನೆದರೆ ಈಗಲೂ ಕಣ್ಣುಗಳು ಮೆಲ್ಲಗೆ ಹಸಿ.
ನಮ್ಮಂತ ಸೀನಿಯರ್ಸ್ ನಮ್ಮಂತ ಜೂನಿಯರ್ಸ್ ಸಲುವಾಗಿ , ಹಾಸ್ಟೆಲ್ ಬಿಲ್ಡಿಂಗ್ ನ ಕಬ್ಬಿಣದ ಗೇಟ್ ನಲ್ಲಿ '+' ಆಕಾರದಲ್ಲಿದ್ದ ಎರಡು ಸರಳುಗಳನ್ನ ಕಿತ್ತು ಕಿಂಡಿ ಮಾಡಿದ್ರು !! ಅದರ ಮೂಲಕ ಒಬ್ಬೊಬ್ಬರೇ ಹೊರ ಬಂದು, ಆದಷ್ಟು ಕತ್ತಲಲ್ಲೇ ಮೆಲ್ಲಗೆ ಓಡುತ ಹೋಗಿ (ಸೆಕ್ಯುರಿಟಿ ಕಣ್ಣಿಗೆ ಬೀಳದೆ) ಕಂಪೌಂಡ್ ಜಿಗಿದು ಸಿನಿಮಾ ನೋಡಿದ್ದು, ಗಲ್ಲಿ ಗಲ್ಲಿ ತಿರುಗಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡಿದ್ದು. ಹಾಸ್ಟೆಲ್ ನಲ್ಲಿ ಇಡುತ್ತಿದ್ದ ಒಬ್ಬ ಗಣಪನ ಮುಂದಿದ್ದ ದೀಪ ಆರದಂತೆ ಕಾಯಲು ಕನಿಷ್ಠ 15 ಜನ, 5 ದಿನ ಶಾಲೆಗೆ ಚಕ್ಕರ್ ಹೊಡೆದದ್ದು. NCC ಡ್ರೆಸ್ ನಲ್ಲಿ ಫೋಟೋ ತೆಗೆಸಿಕೊಂಡದ್ದು, ಗೋವಾ ದಲ್ಲಿನ 14 ದಿನದ ನ್ಯಾಷನಲ್ ಟ್ರೆಕ್ಕಿಂಗ್ ಕ್ಯಾಂಪ್ .
ಹಾಸ್ಟೆಲ್ ನಲ್ಲಿ ನಾವು ಸ್ಟ್ರೈಕ್ ಮಾಡ್ತಿದ್ದದು ವಿಚಿತ್ರವಾಗಿತ್ತು : ಒಂದು ದಿನ ಎಲ್ಲರು ಇವತ್ತು ಬರೀ ಚಪಾತಿ ತಿನ್ಬೇಕು ಅಥವಾ ಬರೀ ಅನ್ನ ತಿನ್ಬೇಕು ಆಗ ಅದು shortage ಆಗುತ್ತೆ ಮತ್ತೆ ನಾಳೆ ಹಾಗಂತ ಪ್ರಿನ್ಸಿಪಾಲ್ ಗೆ ಕಂಪ್ಲೇಂಟ್ ಮಾಡೋದು. ಹೀಗೆ ಅಡುಗೆ ಭಟ್ಟರಿಗೆ ನಮ್ಮ ಅಸಮದಾನವನ್ನ ಮನವರಿಕೆ ಮಾಡುತ್ತಿದ್ದೆವು. ಕೆಲವೊಮ್ಮೆ ಹುಣ್ಣಿಮೆಯ ದಿನ 'ಬೆಳದಿಂಗಳ ಊಟ' ಇರುತ್ತಿತ್ತು - ಹಾಸ್ಟೆಲ್ ಮುಂದಿನ ಗ್ರೌಂಡಿನಲ್ಲಿ ಗುಂಪು ಗುಂಪಾಗಿ ಕೂತು ಒಂದೇ ತಟ್ಟೆಯಲ್ಲಿ ಊಟ. ಒಮ್ಮೆ ರಾತ್ರಿ ಸಿನಿಮಾ ನೋಡಲು ಹೋದಾಗ ವಾರ್ಡನ್ ಮಧ್ಯರಾತ್ರಿ attendance ತೊಗೊಂಡಿದ್ರು - needless to say we were punished. ನಾವು ವರ್ಷದ ಕೊನೆಯಲ್ಲಿ 'ಹಾಸ್ಟೆಲ್ ಡೇ' celebrate ಮಾಡ್ತಿದ್ವಿ with lot of cultural / funny activities. school ಕಿಡಕಿಯ ಸುಮಾರು ಐವತ್ತಕ್ಕೂ ಹೆಚ್ಚು ಗ್ಲಾಸ್ ಗಳನ್ನ ವಿನಾಕಾರಣ ಒಡೆದು ಹಾಕಿದಾಗ, ಪ್ರಿನ್ಸಿಪಾಲ್, ನಮ್ಮ ಮನೆಗೆ ಫೋನ್ ಮಾಡುವುದಾಗಿ ಹೆದರಿಸಿ, ನಮ್ಮನ್ನ suspend ಮಾಡುವ ಮಟ್ಟಿಗೆ ಯೋಚನೆ ಮಾಡಿದ್ದು ಆಗ ಹಾಸ್ಟೆಲ್ ವಾರ್ಡನ್ ದೇವರಂತೆ ಬಂದು ನಮ್ಮನ್ನ ಕಾಪಾಡಿದ್ದರು - Apology letter ಬರೆದದ್ದು ಆಯಿತು.
Exams ಹತ್ರಯಿದ್ದಾಗ ರಾತ್ರಿ ಪ್ಲೇ ಗ್ರೌಂಡಿನ ಲೈಟಿನ ಬೆಳಕಿನಲ್ಲಿ ಓದೋದು - 'ವಿಶ್ವೇಶಯ್ಯ, ಅಂಬೇಡ್ಕರ್ ಹಿಂಗೆ ಓದಿದ್ದು' ಅಂತ ನಾವು ನಾವೇ ಅಂದುಕೊಂಡು ನಗ್ತಿದ್ವಿ. ಬೆಳಗ್ಗೆ ಆರು ಗಂಟೆಗೆ, PT ಸರ್ ಬಂದು ಎಚ್ಚರಿಸಲು ರೂಮಿನ ಬಾಗಿಲು ಮುರಿದು ಹೋಗುವಂತೆ ಬಾರಿಸುತ್ತಿದ್ರು - ನಾವು ಒಮ್ಮೊಮ್ಮೆ ಎಚ್ಚರವಾಗಿದ್ರೂ ಬಾಗಿಲು ತೆರೀತಾಯಿರ್ಲಿಲ್ಲ (PT ಸರ್ ಬಂದು ಎಚ್ಚರಿಸೋದು exam time offer !!). ರೂಮಿನ ಬಾಗಿಲನ್ನ ಸ್ವಲ್ಪವೇ ಸ್ವಲ್ಪ ತೆರೆದು ಒಳಗಡೆಯಿಂದ ಕದದ ಮೇಲೆ ನಮ್ಮ ಶೂಗಳನ್ನ ಇಡುತ್ತಿದ್ದೆವು, ಯಾರಾದರು ಬಾಗಿಲು ತಳ್ಳಿಕೊಂಡು ಒಳ ಬಂದರೆ ಅವರ ತಲೆ ಮೇಲೆ 'ಶೂ' ಅಭಿಷೇಕ. ಒಮ್ಮೆಮ್ಮೆ ವಾರ್ಡನ್ ಗಳ ತಲೆ ಮೇಲೆ ಬಿದ್ದಿದ್ದವು - ಆಗ ನಮ್ಮ ಗತಿ ಏನಾಗಿರಬಹುದು?
ನೀವು ಊಹೆ ಮಾಡ್ತೀರ ಅನ್ಕೊಂಡಿದೀನಿ . . . . ನಾವು ಮಾಡಿದ್ದು ಒಂದೇ ಎರಡೇ?
ಎಲ್ಲಿದ್ದಾರೋ, ಹೇಗಿದ್ದಾರೋ ತಿಳುವಳಿಕೆ ಹೇಳಿ, ಓದು - ಬರಹ ಕಲಿಸಿಕೊಟ್ಟು,
'may god bless you' - 'wish you all the best for you future' ಅಂತ ಮನಸಿನಿಂದ ಹಾರೈಸಿ ನಮ್ಮನ್ನ ಶಾಲೆಯಿಂದ ಕಳಿಸಿಕೊಟ್ಟ :
ಗುರುಗಳು, ಸಹಿಸಿಕೊಂಡ ವಾರ್ಡನ್ ಗಳು- ಅಡುಗೆ ಭಟ್ಟರು, 'ಈಗ ಬ್ಯಾಡ ಆಮೇಲೆ ಬರ್ರಿ ಪ್ರಿನ್ಸಿಪಾಲ್ ಗರಂ ಆಗ್ಯಾರ' ಅಂತ ಹೇಳಿ ಕಳಿಸುತ್ತಿದ್ದ ಪಿವನ್, ಪ್ರತಿ ದಿನ ಬೆಳಗ್ಗೆ ಆರು ಗಂಟೆಗೆ ಬಾಗಿಲು ಬಡಿಯುತ್ತಿದ್ದ ಸೆಕ್ಯುರಿಟಿ ಗಾರ್ಡ್, ರಾತ್ರಿ ಕಂಪೌಂಡಿನ ಹೊರಗೆ ತಳ್ಳುಗಾಡಿಯಲ್ಲಿ ಅಂಗಡಿ ಇಟ್ಟುಕೊಂಡು, ಒಳಗೆ ಇರುತ್ತಿದ್ದ ನಮಗೆ ಪಲಾವ್, ಆಮ್ಲೆಟ್, ಎಗ್ ರೈಸ್ ಪಾರ್ಸಲ್ ಕೊಡುತ್ತಿದ್ದ ಆತನ ಹೆಸರೇನು ? ಇಲ್ಲ ನೆನಪಿಲ್ಲ, ಅಸಲಿಗೆ ನಾವು ಕೇಳಿಯೇ ಇಲ್ಲ. ಈ ಎಲ್ಲವನ್ನ ಜೊತೆಗೆ ಸಂಬ್ರಮಿಸಿದ ಗೆಳೆಯರು. ಎಲ್ಲೇ ಇದ್ದರೂ, ಎಲ್ಲರು ಚೆನ್ನಾಗಿರಲಿ.
ಹೇಳುತ್ತಾ ಹೋದರೆ ಇದು ಮುಗಿಯುವ ಮಾತ? ಖಂಡಿತ ಅಲ್ಲ.
ಅಪ್ಪ-ಅಮ್ಮ, ಶಾಲೆಯಲ್ಲಿ ಕಲಿಸಿದ ಟೀಚರ್ಸ್ , ತಿಳಿದೋ - ತಿಳಿಯದೋ ಏನನ್ನೋ ಕಲಿಸಿಕೊಟ್ಟ ಅಪರಿಚಿತರು ಮತ್ತು ಪರಿಚಿತರು ಹಾಗು ದಿನ ದಿನವೂ ಹೊಸದನ್ನ ತೋರಿಸುವ, ಕಲಿಸುವ ಇಷ್ಟು ಚಂದದ ಬದುಕು - ಈ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನದಂದು ಗೌರವದಿಂದ ನಮಿಸುತ್ತೇನೆ.
"ಕಲಿಯುವವರಿಗೆ ತಕ್ಕ ಗುರು ಸಿಗಲಿ - ಗುರುವಿಗೆ ತಕ್ಕ ವಿದ್ಯಾರ್ಥಿ ಸಿಗಲಿ" ಎನ್ನುವುದಷ್ಟೇ ಪ್ರಾರ್ಥನೆ.
(ಅದೆಷ್ಟೋ ಮರೆಯದೆ ಉಳಿದ ನೆನಪುಗಳಲ್ಲಿ ಇದೂ ಒಂದು)
=====
=====
Aug 23, 2011
ರಣ ಬಿಸಿಲಿನ ಬಳ್ಳಾರಿಯಲ್ಲಿ ತಣ್ಣಗೆ ಎರಡು ಯೌವನದ ಎದೆಗಳ ನಡುವೆ ಪ್ರೇಮವೊಂದು ಮೊಳಕೆಯೋಡೆದಿತ್ತು.
ತುಂಡು ಲಂಗದ ಅವಳನ್ನ, ಪಾಪದ ಗರ್ಭದಿಂದ ಹುಟ್ಟಿದ ಚಲಪತಿ ಅದಿನ್ಯಾವ ಮಟ್ಟಿಗೆ ಪ್ರೀತಿಸಿದನೆಂದರೆ ಊಟ, ನಿದ್ದೆ , ಕೆಲಸ ಉಹುಂ ಯಾವುದೆಂದರೆ ಯಾವುದು ಕೂಡ ಅವನತ್ತ ಸುಳಿಯಗೊಡಲಿಲ್ಲ . ಪತ್ರಗಳು ಅವ್ಯಾಹತವಾಗಿ ಹರಿದಾಡಿದವು. ಅವಳನ್ನ ತನ್ನ ಮಗ ಈ ಪರಿ ಪ್ರೀತಿಸುವುದನ್ನ ಕಂಡ ಚಲಪತಿಯ ತಾಯಿಯೇ "ಇಷ್ಟೊಂದು ಪ್ರೀತಿಸಬೇಡ ಮಗನೆ, ಯಾವ ಹೆಣ್ಣೂ ಇಷ್ಟು ಪ್ರೀತಿಗೆ ಅರ್ಹಳಲ್ಲ" ಅಂತ ಹೇಳುತ್ತಾಳೆ. ಆದ್ರೆ, ಅವನ ತಲೆಯ ಮೇಲೆ ಪ್ರೇಮದ ಭೂತಸವಾರಿ.
ಮುಂದುವರಿದ ದಿನಗಳಲ್ಲಿ ಆ ಹುಡುಗಿ ಚಲಪತಿಯನ್ನ ವಿನಾಕಾರಣ ದೂರಮಾಡ್ತಾಳೆ, ಬೇರೊಬ್ಬನೊಂದಿಗೆ ಮದುವೆ ಆಗ್ತಾಳೆ. ಆಗಲೇ ಚಲಪತಿ ಅವಳ ಗಂಡನ ಸಾವಿಗಾಗಿ ಕಾಯಲಾರಂಭಿಸುತ್ತಾನೆ !!
ಕಾಯುತ್ತಾ ಕಾಯುತ್ತಾ ತಾನೂ ಬೆಳೆಯುತ್ತಾನೆ - ಸಾಮಾಜಿಕವಾಗಿ, ಆರ್ಥಿಕವಾಗಿ; ಮುಂದೆಂದೋ ಒಂದು ದಿನ ಅವಳು ತನ್ನತ್ತ ಬಂದಾಗ ಯಾವುದೇ ಕೊರತೆ ಕಾಣಬಾರದಲ್ಲ ಅದಕ್ಕೆ. ತನ್ನ ಮಗ ಅವಳನ್ನಲ್ಲದೆ ಬೇರೆ ಯಾರನ್ನೂ ಮದುವೆಯಾಗಲಾರ ಅಂತ ಚಲಪತಿಯ ತಾಯಿಗೆ ಮನವರಿಕೆಯಾಗಿರೂತ್ತೆ. ಹಾಗಾಗಿ ಆಕೆ, ಮಗ ಚಲಪತಿ ದೈಹಿಕ ಸುಖವಾದರೂ ಪಡೆಯಲಿ ಅಂತ ಒಬ್ಬ ವಿಧವೆಯನ್ನ ಒಪ್ಪಿಸುತ್ತಾಳೆ - ಆ ವಿಧವೆಗೂ ಅದರಿಂದ ಲಾಭವಿರುತ್ತೆ. ಚಲಪತಿ ದೈಹಿಕ ಕ್ರಿಯೆಯಲ್ಲಿ ತೊಡಗುತ್ತಾನೆ ಕೂಡ -ಒಂದೆರಡು ಬಾರಿ. ತಾಯಿಯೇ ಮಗನ ದೈಹಿಕ ಸುಖಕ್ಕಾಗಿ ಪರಧರ್ಮದ ವಿಧವೆಯನ್ನ ತನ್ನ ಮನೆಯಲ್ಲೇ ಮಲಗಿಸುವ ಕೆಲಸ ಮಾತ್ರ ಒಂದು ತೆರನಾದ ಕಂಪನ ಉಂಟು ಮಾಡುತ್ತೆ.
ದಿನಗಳು ಉರುಳತ್ತಲೇ ಇರುತ್ತವೆ, ಮುಪ್ಪು ಮರೆಯಲ್ಲಿ ನಿಂತು ಹೊಂಚು ಹಾಕಿ ಕುಳಿತಿರುತ್ತೆ. ಚಲಪತಿ ತನ್ನನ್ನ ತಿರಸ್ಕರಿಸಿದ ಹುಡುಗಿಯ ಸಲುವಾಗಿ ಕಾಯುತ್ತಲೇ ಇರುತ್ತಾನೆ. ತನ್ನೊಳಗಿನ ನೋವನ್ನ ಯಾರಿಗಾದರೂ ಹೇಳಲು ಅವನಿಗಾಗುವುದಿಲ್ಲ. ಎಲ್ಲಾ ತಿಳಿದ ಅವನ ತಾಯಿಯೂ ಸತ್ತುಹೊಗುವಳು. ಆಗಲೇ ಚಲಪತಿಗೆ ಅನಿಸುವುದು 'ಬಾಲ್ಯ ಮತ್ತು ಯೌವನ ಮುಗಿದವು' ಅಂತ.
ಚಲಪತಿಯ ಪ್ರೇಮದೇವತೆ ತನ್ನದೇ ಸಂಸಾರ, ಪ್ರತಿಷ್ಠೆ, ಗೌರವ ಎಲ್ಲವನ್ನ ಅನುಭವಿಸುವಾಗ ತನ್ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಚಲಪತಿ ಆಕೆಗೆ ನೆನಪೇ ಆಗುವುದಿಲ್ಲ. ತನ್ನದು ತಪ್ಪು ಅಂತ ಒಪ್ಪಲು ಅವಳ ಅಹಂ ಅಡ್ಡಿಪದಿಸುತ್ತೆ. ಚಲಪತಿ ಒಬ್ಬ ಅಸ್ತಿತ್ವದಲ್ಲೇ ಇಲ್ಲದವನು, ಅವನು ಕೇವಲ ನೆರಳು ಮಾತ್ರ ಅಂದುಕೊಂಡಿರುತ್ತಾಳೆ.
ಒಂದು ದಿನ ಚಲಪತಿಗೆ ಸುದ್ದಿ ಬರುತ್ತೆ, ಅವನ ಪ್ರೀತಿಯ ಹುಡುಗಿಯ ಗಂಡ ಕೊನೆಯುಸಿರೆಳೆದ ಸುದ್ದಿಯದು. ಕೊನೆಗೂ ಚಲಪತಿ ಕಾಯುತ್ತಿದ್ದ ದಿನ ಬಂದಿತ್ತು. ಅವಳ ಗಂಡ ಸತ್ತು ಇನ್ನೂ ದಿನಗಳೇ ಕಳೆದಿರಲಿಲ್ಲ ಆಗ ಮತ್ತೊಮ್ಮೆ ಚಲಪತಿ, ಆಕೆಯ ಮುಂದೆ ನಿಂತು ಇನ್ನೂ ಜೀವಂತವಾಗಿರುವ ತನ್ನ ಪ್ರೇಮ ತೋಡಿಕೊಳ್ಳುತ್ತಾನೆ -ಬರೋಬ್ಬರಿ ಅರ್ಧಶತಮಾನಗಳ ನಂತರ !!!
ಪ್ರೇಮ ಮತ್ತು ಮುಪ್ಪು ಎರಡೂ ನಿರ್ಲಜ್ಜತೆಗೆ ದೂಡುತ್ತವೆ.
ಮುಪ್ಪಿನಲ್ಲಿ ಮತ್ತೆ ಪತ್ರಗಳು ಶುರುವಾಗುತ್ತವೆ.
ಆ ಪಕ್ವ ಹೃದಯಗಳ ಆಂತರ್ಯದಲ್ಲಿ ಮಾತಿಗೆ ಮೀರಿದ ಪ್ರೀತಿಯೊಂದು ಮಡುವುಗಟ್ಟಿ ನಿಂತಿತ್ತು . ಅಲ್ಲಿಗೆ ಮುಗಿಯುತ್ತೆ ಕಥೆ. ಎಪ್ಪತ್ತು ವಯಸ್ಸು ದಾಟಿದ ಅವರಿಬ್ಬರೂ ಒಂದಾದರೋ ಇಲ್ಲವೊ ನೀವೇ ಓದಿ ತಿಳಿಯಬೇಕು. ಚಲಪತಿಯನ್ನ ಅರ್ಧ ಶತಮಾನ ಕಾಯುವಂತೆ ಮಾಡಿದವಳ ಹೆಸರು "ಮಾಂಡೋವಿ".
'ರವಿ ಬೆಳಗೆರೆ' ಯವರ ಕಾದಂಬರಿಯಿದು 'ಮಾಂಡೋವಿ'. ಒಂದು ಬೇರೆಯದೇ ಭಾವವನ್ನುಂಟುಮಾಡುವ, ಅಲೆಯೆಬ್ಬಿಸುವ ಕಾದಂಬರಿ. ಓದದಿದ್ದರೆ ನೀವು ಓದಬೇಕು. ಮಾಂಡೋವಿ ಖಂಡಿತವಾಗಿ ಹತ್ತಿರವಾಗ್ತಾಳೆ, ಏಕಾಂತದಲ್ಲಿ ನೆನಪಾಗುತ್ತಾಳೆ. ಮಾಂಡೋವಿ (ಗೋವಾ ರಾಜ್ಯದ ಪ್ರಮುಖ ನದಿಯ ಹೆಸರು) ನಿಲ್ಲದೆ ಹರಿಯುತ್ತಾಳೆ. ಲೇಖಕ ರವಿ ಬೆಳಗೆರೆಯವರು ಸಮರ್ಥವಾಗಿ ಮಾಂಡೋವಿಯನ್ನ ತೋರಿಸುತ್ತಾ ಕೆಲವೇ ಜನ ಅನುಭವಿಸುವ ಪ್ರೇಮದ ಇನ್ನೊಂದು ಮಗ್ಗುಲನ್ನ ತೆರೆದಿಡುತ್ತಾರೆ.
ಮಾಂಡೋವಿ, ಪ್ರಖ್ಯಾತ ಲೇಖಕ 'ಗ್ಯಾಬ್ರಿಯಲ್ ಗಾರ್ಸಿಯ ಮಾರ್ಕ್ವೆಜ್' (Gabriel José de la Concordia García Márquez) ಅವರ 'ಲವ್ ಇನ್ ದ ಟೈಮ್ ಆಫ್ ಕಾಲರ' ಕಾದಂಬರಿಯ ಪ್ರೇರಣೆ.
ಸೂಚನೆ :: ಇದು 'ಮಾಂಡೋವಿ'ಯ ವಿಶ್ಲೇಷಣೆ, ವಿಮರ್ಶೆ ಅಥವಾ ಇನ್ಯಾವುದೋ ರೀತಿಯ ತರ್ಕಗಳಿಗೆ ನೇತಾಡುವ ಬರಹವಲ್ಲ.
ಇದೊಂದು ಕೇವಲ ಕಾದಂಬರಿಯನ್ನ ಪರಿಚಯಿಸುವ ಪ್ರಯತ್ನ ಅಷ್ಟೇ.
=====
=====
Aug 11, 2011
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು
ತೀರ್ಥಕ್ಷೆತ್ರದಲ್ಲಿ ಕುಡಿದು, ಒಂದು ಗ್ಲಾಸನ್ನೋ ಬಾಟಲಿಯನ್ನೋ
ಟೇಬಲ್ಲಿಗೆ ಕುಟ್ಟಿ ಎದ್ದು ಹೋಗುವನು ಕುಡುಕನಲ್ಲ !!!
ಇಡೀ ಕುಡುಕ ಸಂತತಿಗೆ ಅವನು - ಅವಮಾನ, ಅಸಹ್ಯ
ನೇರವಾಗಿ ಮನೆಗೆ ಹೋದರಂತೂ, ಧರ್ಮದ್ರೋಹಿ
ಕುಡಿದು ಕುಡಿದು ಕುಡಿಯುತ್ತಲೇ ತೇಲಾಡುತ್ತಾ, ಓಲಾಡುತ್ತಾ,
ಹಾಡುತ್ತಾ ಆಯಾ ತಪ್ಪಿ ಬಿದ್ದು, ಆದ ನೋವನ್ನು ಮರೆಯಲು ಔಷಧಿಗಾಗಿ
ತಿರುಗಿ ಮದಿರಾಲಯಕ್ಕೆ ಬಂದು, ವಾಸ್ತು ಪ್ರಕಾರ ಟೇಬಲ್ಲು ಹುಡುಕಿ ಕೂತು
ಟಿಪ್ಸ್ ಹಣವನ್ನ ಮೊದಲೇ ಕೊಟ್ಟು, ಉಳಿದ ಹಣ ಮುಗಿಯುವ ತನಕ
"ಒಂದು ಲಾರ್ಜ್" ಅಂತಾನಲ್ಲ ಅವನು, ಸಾಕ್ಷಾತ್ ನಿಜ ಕುಡುಕ - ಕುಡುಕ ಚಕ್ರವರ್ತಿ
ಕುಡುಕರೆಂದರೆನು ಕಡಿಮೆಯೇ ? ಉಹುಂ !!
ಕುಡುಕರಾಗಲು ಅರ್ಹತೆ ಬೇಕು, ಸ್ಥಾನಮಾನಗಳು ಬೇಕು
ಎಲ್ಲರು ಕುಡುಕರಾಗಲಾರರು,
ಅದಕ್ಕೂ ಪ್ರತಿ ಸಂಜೆ ದೀರ್ಘ ತಪಸ್ಸು ಮಾಡಬೇಕು
=====
Jul 31, 2011
ನಾನು ಆರಾಮಾಗಿ ಹತ್ತಿದೆ ಯಾಕಂದ್ರೆ ಸೀಟು ಸಿಗೋದು ಖಾತ್ರಿಯಿರ್ಲಿಲ್ಲ, ಅದಕ್ಯಾಕ ಗುದ್ದಾಡ್ಕೊಂಡು ಹತ್ತೋದು. ರೈಲಿನಲ್ಲೂ ಒಂದೇ ಕಡೆ ಕೂತು ಪ್ರಯಾಣ ಮಾಡೋನು ಟೆಸ್ಟ್ ಲೆಸ್ ಫೆಲೋ. ಸೀಟು ಹಿಡಿದು ಒಂದೇ ಕಡೆ ಕೂತ್ಕೊಬೇಕು ಅಂದ್ರೆ ಬಸ್ಸಿಗೆ ಹೋಗಬಹುದಲ್ವಾ ?. ಆದ್ರೂ, ಪಕ್ಕದ ಸೀಟಿನಲ್ಲಿ ಯಾರು ಕೂತ್ಕೋತಾರೆ ಅನ್ನೋ ಹುಳ ತಲೇಲಿ ಇತ್ತಲ್ಲ ಅದಕ್ಕೆ ಒಮ್ಮೆ ಕಣ್ಣಾಡಿಸಿದೆ. ಖಾಲಿ ಸೀಟು ಕಂಡಿತು, ನೋಡಿದ್ರೆ ಕಿಡಕಿ ಸೀಟಿಗೆ ಯಾರೋ ಪೇಪರ್ ಇಟ್ಟಿದ್ರು 'ಛೆ' ಅಂದುಕೊಂಡು ಅದೇ ಸೀಟಿನ ತುದಿಗೆ ಕೂತು ಎದುರುಗಡೆ ನೋಡಿದೆ. ಗುಬ್ಬಚ್ಚಿ ಕಂಡಂಗೆ ಹೆಣ್ಣು ಪ್ರಾಣಿಯೊಂದು ಕಿಡಿಕಿ ಸೀಟಿನಲ್ಲಿ ಕಂಡಿತು ಮತ್ತೆ 'ಛೆ' ಅಂದುಕೊಂಡೆ ಯಾಕಂದ್ರೆ ಅವಳ ಪಕ್ಕದಲ್ಲಿ ಯಾರೋ ಪೇಪರ್, ಬ್ಯಾಗು ಇಟ್ಟಿದ್ರು. 'ದೇವ್ರೇ ಪಕ್ಕದಲ್ಲಿ ಕೇಳಿದ್ರೆ ಎದುರುಗಡೆ ಕೊಡ್ತಿಯಲ್ಲ' ಅಂತ ನನ್ನೊಳೋಗೆ ಹೇಳಿಕೊಳ್ಳುವಾಗಲೇ ಒಬ್ಬ ಅಂಕಲ್ ಬಂದು 'ನಾನಿಲ್ಲಿ ಸೀಟು ಹಾಕಿದಿನಮ್ಮ' ಅಂದ್ರು.
ಆ ಹುಡುಗ ಯಶವಂತಪುರದಲ್ಲಿ ಇಳಿದ - 'ಖದೀಮ, ಇವಳನ್ನ ರೈಲು ಹತ್ಸಲಿಕ್ಕೆ ಮೆಜೆಸ್ಟಿಕ್ ತನಕ ಬಂದಿದಾನೆ. ಅದೆಷ್ಟು ರೈಲು ಹತ್ತಿಸಿದ್ನೋ ಏನೋ, ಇವ್ಳು ಎಷ್ಟು ನಂಬಿದ್ಲೋ ಏನೋ' ಅನ್ಕೊಂಡೆ. ಯಾರೋ ಬಂದ ಹಾಗಾಯ್ತು ಅವರು ಸೀಟು ಕೇಳುವ ಮೊದ್ಲೇ ನಾನೇ ಸರ್ರನೆ ಕಿಡಕಿ ಸುಂದರಿ ಕಡೆ ಜಾರಿ, ದಾನವೀರ ಶೂರ ಕರ್ಣನಾದೆ. ನನಗೆ ಎಷ್ಟೋ ವರ್ಷಗಳನ್ನ ಕೂತಲ್ಲೇ ಕಳೆದಂಗಾಗಿತ್ತು, ಈಗ ಒಂಥಾರ ನಿರಾಳ. ರೈಲು ತನ್ನ ಪಾಡಿಗೆ ತಾನು ಹೊರಟಿತ್ತು. ದೇವ್ರೇ ಕೊನೆಗೂ ಕಣ್ಣು ಬಿಟ್ಟಲ್ಲಪ್ಪ- ಹುಡುಗಿ ನನ್ನ ಪಕ್ಕ ಬಂದ್ರು, ನಾನು ಹುಡುಗಿ ಪಕ್ಕ ಹೋದರು ಒಂದೇ, ಅಲ್ವಾ?
ಆಮೇಲೆ ಅಲ್ಲೇ ಸುತ್ತ-ಮುತ್ತಾ ಎರಡು-ಮೂರು ಸಲ ಸೀಟು ಬದಲಾಯಿಸಿದೆ. ಈವರೆಗಿನ ನನ್ನ ರೈಲು ಪ್ರಯಾಣದಲ್ಲಿ ನಾನು ತುಂಬಾ ಹೊತ್ತು ಕೂತಲ್ಲೇ ಕೂತಿದ್ದು ಅದೇ ಮೊದಲು - only because of that girl. ಬೆಂಗಳೂರಿನಿಂದ ಧಾರವಾಡಕ್ಕೆ Intercity train ನಲ್ಲಿ ಹೋದ್ರೆ ಒಂಬತ್ತು ತಾಸು ಬೇಕಾಗುತ್ತೆ. ಆ ಒಂಬತ್ತು ತಾಸಿನಲ್ಲಿ ಸುಮಾರು ಐದು ತಾಸು ನಾನು ಅವಳ ಜೊತೆಯಲ್ಲೇ ಇದ್ದೆ (ನಡುನಡುವೆ ಸುತ್ತಾದೊದನ್ನ ಬಿಟ್ಟು). ಹುಬ್ಬಳ್ಳಿ ಬಂತು ಎಲ್ಲರು ಇಳಿದು ಹೋದರು.
ಸ್ವಲ್ಪ ಹೊತ್ತು ಕೂತೆ, ನಾನಿದ್ದ ಡಬ್ಬಿ ಕೊನೆಯಿಂದ ಮೂರನೆಯದಾಗಿತ್ತು. ರೈಲ್ವೆ ಕಾರ್ಮಿಕರು ಹುಬ್ಬಳ್ಳಿಯಿಂದ ಕ್ಲೀನ್ ಮಾಡೋಕೆ ಶುರು ಮಾಡಿದ್ರು, ಧೂಳು ಅಡರುತ್ತಿತ್ತು. ಬ್ಯಾಗನ್ನು ಹೆಗಲಿಗೇರಿಸಿಕೊಂಡು ಒಂದೊಂದೇ ಡಬ್ಬಿಗಳನ್ನ ದಾಟಿದೆ. ಅಲ್ಲಿ ನಾಲ್ಕೈದು ಜನರಲ್ಲಿ ಆ ಹುಡುಗಿಯು ಇದ್ದಿದ್ದು ಗೊತ್ತಾಯ್ತು ಆದ್ರೆ ಹತ್ರ ಹೋದಾಗ ಅವಳ ಕಡೆ ನೋಡಲಿಲ್ಲ. ಧಾರವಾಡದಲ್ಲಿ ಮನೆಗೆ ಹೋದಾಗ ರಾತ್ರಿ ಹೊನ್ನೊಂದು ಹತ್ತಿರವಾಗಿತ್ತು. 'ಚೆನ್ನಾಗಿತ್ತಾ ಪ್ರಯಾಣ ?' ಮನೆಯಲ್ಲಿ ಸಾಮಾನ್ಯ ಪ್ರಶ್ನೆ.
'It was beautiful' ಹಾಗಂತ ಹೇಳ್ಬೇಕು ಇಲ್ಲಾಂದ್ರೆ ಸುಮ್ನೆ ಪ್ರಶ್ನೆ, ಗಾಬರಿ ಶುರುವಾಗ್ತವೆ.
ಮರುದಿನ ಬಟ್ಟೆ ತೊಳೆಯೋಕೆ ಹಾಕುವಾಗ ತಂಗಿ, ಶರ್ಟ್ ನಲ್ಲಿದ್ದ ಹಾಳೆ ನೋಡಿ ಏನೋ ಕವನ ಬರ್ದಿರ್ತಾನೆ ಅಂತ ಓದಿದಾಳೆ.
ನನ್ನಿಂದ ವಿರಚಿತ ಕವಿತೆ ತೋರಿಸಿ 'ಯಾರಿಗೋ ಪ್ರಪೋಸ್ ಮಾಡಿರೋ ಹಾಗಿದೆ' ಅಂದ್ಲು.
'yep, But no use' ಅಂದೆ
she said 'I think , You don't know how to approach'
'May be, I have not attended any classes of it' we both laughed.
'ಹೆಂಗಿದ್ಲು ?' she asked
"Beautiful" ಅನ್ನುತ್ತಾ ಬೈಕಿನ ಕಿಕ್ ಅನ್ನು ಜೋರಾಗಿಯೇ ಒದ್ದೆ.
who knows ? same 'window beauty' may ask me a lift now . hoping for the best.
=====
Jul 10, 2011
ಕಾತೆವಾಡದ ರಾಜ ಮನೆತನಕ್ಕೆ ತೀರಾ ಹತ್ತಿರದ, ತುಂಬಾ ಅನುಕೂಲಸ್ತ ಕುಟುಂಬದ ಹುಡುಗಿ ಅವಳು - ಗಂಗಾ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಷ್ಟಾಗಿ ಒತ್ತು ಕೊಡದ ಆ ಕಾಲದಲ್ಲಿ ಆಕೆ ಸ್ಕೂಲ್ ಗೆ ಹೋಗ್ತಾಯಿದ್ಲು. ಅವಳಿಗೆ ಆಸೆಯಿತ್ತು - ಸಿನಿಮಾ ನಟಿಯಾಗಬೇಕು ಅಂತ. ಒಮ್ಮೆ ಆಕೆಯ ಕ್ಲಾಸ್ ಮೇಟ್ ಮುಂಬೈ ನೋಡಿ ಬಂದವರು, ಮುಂಬೈ ಹಾಗಿದೆ ಗೊತ್ತಾ? ಹೀಗಿದೆ ಗೊತ್ತಾ? ಆಹಾ ಎಷ್ಟು ದೊಡ್ಡ ಕತ್ತದಗಲಿದಾವೆ ಗೊತ್ತಾ? ಅಂತೆಲ್ಲ ಮಾತಾಡಿದ್ರು. ಗಂಗಾಗೆ ತಾನು ಮುಂಬೈ ನೋಡಬೇಕು ಆನೋ ಆಸೆ ಹುಟ್ಟಿತು. ಸಿನಿಮಾ ನಟಿಯಾಗೊದಂತು ದೂರದ ಮಾತು ಅಂತ ಅವಳಿಗೆ ಗೊತ್ತಿತ್ತು ಯಾಕಂದ್ರೆ ಕೌಟುಂಬಿಕ ಹಿನ್ನಲೆ ಹಾಗಿತ್ತು / ದೊಡ್ಡದಿತ್ತು. ಆಗಲೇ ಗಂಗಾನ ತಂದೆ ರಮಣಿಕ್ ಹೆಸರಿನ ಹುಡುಗನನ್ನ ಕೆಲಸಕ್ಕೆ ನೆಮಿಸಿಕೊಳ್ಳುತ್ತಾರೆ, ಅವನು ಮುಂಬೈ ನೋಡಿದವನು ಅಂತ ಗೊತ್ತಾದ ಮೇಲೆ ಗಂಗಾ ಅವನಿಗೆ ಹತ್ರ ಆಗ್ತಾಳೆ. ಆತ ತನಗೆ ಸಿನಿಮಾಕ್ಕೆ ಹತ್ತಿರವಿರುವ ಸ್ನೇಹಿತರಿದ್ದಾರೆ ಅಂತ ಹೇಳ್ತಾನೆ - ಗಂಗಾ ನಂಬಿ ಬಿಡ್ತಾಳೆ.
ಇಬ್ಬರ ನಡುವೆ ಪ್ರೀತಿ ಬೆಳೆಯುತ್ತೆ. ಒಂದು ದಿನ ಒಡವೆ,ಹಣವನ್ನ ಕಟ್ಟಿಕೊಂಡು ಗಂಗಾ ರಮಣಿಕ್ ನೊಂದಿಗೆ ಮುಂಬೈಗೆ ಬರ್ತಾಳೆ. ಮನೆಯವರಿಗೆ ಒಂದೇ ಒಂದು ಚೀಟಿಯನ್ನು ಸಹ ಬರೆದಿಟ್ಟಿರಲ್ಲ.
ಅವಳು ತಂದ ಹಣದಲ್ಲಿ ಇಬ್ಬರು ಲಾಡ್ಜಿನಲ್ಲಿ ಉಳಿತಾರೆ, ಸಿಟಿ ಸುತ್ತಾಡ್ತಾರೆ, ದೈಹಿಕವಾಗಿ ಒಂದಾಗ್ತಾರೆ - ರಮಣಿಕ್ ಜೊತೆಯಾಗಿ ಸಂಸಾರ ಮಾಡೋಣ ಅಂತ ಹೇಳಿರ್ತಾನೆ. ಇನ್ನೇನು ಹಣವೆಲ್ಲ ಖಾಲಿಯಾಗ್ತಾಯಿದೆ ಅನ್ನುವಾಗ ಅವನು ಮನೆ ನೋಡ್ತೀನಿ ಅಲ್ಲಿಯವರೆಗೂ ನನ್ನ ಆಂಟಿ ಮನೆಲಿರು ಅಂತ ಹೇಳಿ ಗಂಗಾಳನ್ನ ತನ್ನ ಆಂಟಿ ಜೊತೆ ಕಳಿಸಿ. ಮನೆ ಹುಡುಕಲಿಕ್ಕೆ ಅಂತ ಹೋಗ್ತಾನೆ.
ರಮಣಿಕ್ ನ ಆಂಟಿ ಜೊತೆ ಟ್ಯಾಕ್ಸಿಯಲ್ಲಿ ಬಂದು ಗಂಗಾ ಇಳಿಯೋದು - ಮುಂಬೈ ನಗರಿಯ 'ಕಾಮಾಟಿಪುರ', ರೆಡ್ ಲೈಟ್ ಏರಿಯ!! ಗಂಗಾಗೆ ಆ ಜಾಗ ಎಂತದು ಅಂತ ಗೊತ್ತಿರಲ್ಲ. ಆದರೂ ಯಾಕೋ ಏನೋ ಸರಿಯಿಲ್ಲ ಅನಿಸುತ್ತೆ. ಹೇಗೋ, ಇವತ್ತು ಒಂದು ದಿನ ತಾನೇ. ನಾಳೆ ನಾನು ರಮಣಿಕ್ ನ ಜೊತೆ ಹೊಸ ಮನೆಗೆ ಹೋಗ್ತೀನಿ ಅಂತ ಅನ್ಕೊತಾಳೆ, ಆದರೆ ಆಂಟಿ ಹೇಳಿದ್ದು ಕೇಳಿ ಗಂಗಾಗೆ ದಂಗುಬಡಿಯುತ್ತೆ - ರಮಣಿಕ್ ಗಂಗಾಳನ್ನ ಮಾರಾಟ ಮಾಡಿ ಹೋಗಿಬಿಟ್ಟಿರುತ್ತಾನೆ. ಇನ್ನು ಆಂಟಿ, ಆಕೆ ಆಂಟಿಯಲ್ಲ - ಘರ್ ವಾಲಿ.
ಗಂಗಾ ಜಗಳ ಮಾಡ್ತಾಳೆ, ಕಿರಿಚಾಡ್ತಾಳೆ ಅವಳಿಗೆ ಒದೆಗಳು ಬೀಳ್ತವೆ ಮತ್ತೆ ಅಳ್ತಾಳೆ. ಕೊನೆಗೆ ಎಲ್ಲಾ ರೀತಿಯಲ್ಲಿ ಯೋಚಿಸಿ ತಾನು ವೇಶ್ಯೆಯಾಗಲಿಕ್ಕೆ ತಯಾರು ಅಂತಾಳೆ - ಕಾತೆವಾಡದ ತುಂಬಾ ಅನುಕೂಲಸ್ತ ಮನೆಯ ಹುಡುಗಿ. ಮಾರಾಟಮಾಡಿದ ರಮಣಿಕ್ ಒಂದು ವಾರ ಗಂಗಾಳನ್ನ ದೈಹಿಕಾವಾಗಿ ಉಪಯೋಗಿಸಿಕೊಂಡು, ಗಂಗಾ ಇನ್ನು ಕನ್ಯೆ ಅಂತ ಹೇಳಿ ಮಾರಾಟ ಮಾಡಿರ್ತಾನೆ. ತಾನು ಕನ್ಯೆ ಅಲ್ಲ ಅಂತ ಗಂಗಾ ಕೂಡ ಘರ್ ವಾಲಿಗೆ ಹೇಳೋದಿಲ್ಲ. ಅವಳ ಜೊತೆ ಕಾಮಾಟಿಪುರದಲ್ಲಿ ಮಲಗಿದ ಮೊದಲ ಗಂಡಸಿಗೆ ಆಕೆ ಇಷ್ಟ ಆಗ್ತಾಳೆ. ಆ ಗಂಡಸು ಎಲ್ಲಾ ಮುಗಿದ ಮೇಲೆ ನಿನ್ನ ಹೆಸರೇನು ಅಂತ ಕೇಳ್ತಾನೆ. ಸ್ವಲ್ಪ ಸುಮ್ಮನಿದ್ದು ಗಂಗಾ, 'ಗಂಗೂ' ಅಂತಾಳೆ - ಬರ್ತ್ ಆಫ್ ಪ್ರೋಷ್ಟಿಟ್ಯುಟ್. ನಂತರ ಅವಳನ್ನೇ ಹುಡುಕಿಕೊಂಡು ಎಷ್ಟೋ ಜನ ಬರೋಕ್ಕೆ ಶುರುಮಾಡ್ತಾರೆ.
ಗಂಗೂ ತನ್ನ ಬುದ್ಧಿವಂತೆಕೆಯಿಂದ, ಪ್ಲ್ಯಾನ್ ಗಳಿಂದ ಬೆಳೆದ ರೀತಿ ಅಮೇಜಿಂಗ್ ಅನ್ಸಿಬಿಡುತ್ತೆ. ಮುಂದೆ ಆಕೆ ಇಡೀ ಕಾಮಾಟಿಪುರವನ್ನ ರಾಣಿಯಂತೆ ಆಳುತ್ತಾಳೆ. ಅದೆಷ್ಟೋ ಕಷ್ಟಗಳಿಂದ ವೇಶ್ಯೆಯರನ್ನ ಕಾಪಾಡ್ತಾಳೆ. ಎಲ್ಲರು ಆಕೆಗೆ 'ಅಮ್ಮ' ಅಂತಾರೆ. ವೇಶ್ಯೆಯರು ಸಮಾಜಕ್ಕೆ ಎಷ್ಟರಮಟ್ಟಿಗೆ ಅವಶ್ಯಕ ಅಂತ ಆಕೆ ಮಾಡಿದ ಭಾಷಣ ಸಭೆಯಲ್ಲಿ ನೆರೆದಿದ್ದ ರಾಜಕಾರಣಿಗಳಿಗೆ, ಸಮಾಜ ಸೇವಕರಿಗೆ, ದೊಡ್ಡ ದೊಡ್ಡ ಹುದ್ದೆಯಲ್ಲಿರುವವರಿಗೆ ಸಿಡಿಲು ಬಡಿದಂತಾಗಿತ್ತು.
ಗಂಗೂಬಾಯಿ ಸೀರೆಯ ಅಂಚಿಗೆ ಬಂಗಾರದ ಪಟ್ಟಿಯಿರ್ತಾಯಿತ್ತು, ಬ್ಲೌಸಿಗೆ ಬಂಗಾರದ ಗುಂಡಿಗಳು. ಆ ಕಾಲದಲ್ಲಿ ಆಕೆಯ ಹತ್ತಿರ ಇದ್ದಿದ್ದು 'ಬೆಂತ್ಲಿ' ಕಾರಿತ್ತು. ಭಯಂಕರ ಆಸ್ತಿ. ಈಗಲೂ ಕಾಮಾಟಿಪುರದ ಎಷ್ಟೋ ಮನೆಗಳಲ್ಲಿ ಆಕೆಯನ್ನ ಪೂಜಿಸ್ತಾರೆ, ಆಕೆದೊಂದು ಫೋಟೋ ಇಟ್ಟಿರ್ತಾರೆ. ಅಲ್ಲಿಯೇ ಆಕೆದೊಂದು ಮೂರ್ತಿಯಿದೆ.
೧೯೬೦ ರಲ್ಲಿ ಒಬ್ಬ ವೇಶ್ಯೆಯಾಗಿ / ಕಾಮಾಟಿಪುರದ ಲೀಡರ್ ಆಗಿ ಭಾರತದ ಪ್ರದಾನ ಮಂತ್ರಿ ನೆಹರು ಜೊತೆ ಆಕೆ ಮೀಟಿಂಗ್ ಮಾಡಿದ್ದಳು ಅಂದ್ರೆ ನೀವು ನಂಬ್ತೀರಾ ? ನಂಬಲೇ ಬೇಕು!!
"ಯಾಕಮ್ಮ ನೀನು ವೆಶ್ಯೇಯಾದೆ ? ಒಂದು ಒಳ್ಳೆ ಕೆಲ್ಸಾ ಮಾಡೋದಲ್ವ ? ಒಳ್ಳೆ ಗಂಡನ ಜೊತೆ ಇರಬಹುದಲ್ವಾ ?" ಅಂತ ನೆಹರು ಕೇಳಿದ್ರೆ.
"ನೀವು ನನ್ನ ಶ್ರೀಮತಿ. ನೆಹರು ಅಂತ ಮಾಡಿಕೊಳ್ಳೋದಾದ್ರೆ, ನಾನು ಈಗಿನ ಕೆಲಸ ಬಿಡ್ತೀನಿ" ಅಂದಳು ಗಂಗೂಬಾಯಿ, ನೆಹರು ಕಕ್ಕಾಬಿಕ್ಕಿ.
ನೂರಾರು ಜನ ವೇಶ್ಯೆಯರನ್ನ ಮತ್ತು ರಾಜಕಾರಣಿಗಳನ್ನ, ಗೂಂಡಾಗಳನ್ನ, ಮಾದ್ಯಮದವರನ್ನ ಆಕೆ ಹ್ಯಾಂಡಲ್ ಮಾಡ್ತಿದ್ದಳು ಅಂದ್ರೆ ಅದೇನ್ ತಮಾಷೆ ಮಾತಾ?
ಮಹಾನಗರಿ ಮುಂಬೈ ಕ್ರೂರಪ್ರಪಂಚ/ ಅಂಡರ್ ವಲ್ಡ್ ನ ಇನ್ನು ಅನೇಕ ರಾಣಿಯರ ಬಗ್ಗೆ ನಿಮಗೆ ಓದಬೇಕು ಅನಿಸಿದರೆ.
ಎಸ್. ಹುಸೇನ್ ಜೈದಿ ಬರೆದಿರುವ "ಮಾಫಿಯ ಕ್ವೀನ್ಸ್ ಆಫ್ ಮುಂಬೈ" ಪುಸ್ತಕವನ್ನ ನೀವು ಓದಬೇಕು.
ಓದಿದ ಮೇಲೆ ಖಂಡಿತವಾಗಿಯೂ ಬೇರೆಯದೊಂದು ಪ್ರಪಂಚ ನಿಮಗೆ ಕಾಣುತ್ತೆ. ನೀವು ಓದ್ತೀರಾ ನನಗೊತ್ತು.
=====
=====
Jun 21, 2011
೧. 'ಇದು ನಾಯಿ ಪ್ರೀತಿ'
ನಿನ್ನ ಕೇಶರಾಶಿ ನೋಡಲು ರೋಮಾಂಚನ
ನೀ ನನ್ನತ್ತ ಬರಲು ನನ್ನೊಳಗೆ ಮಧುರ ಕಂಪನ
ಆದರೂ ಸಹಿಸಲಾರೆ ನಿನ್ನೀ ಎಂಜಲಿನ ತುಂತುರು ಸಿಂಚನ
ನನ್ನ ಮುದ್ದು ನಾಯಿಮರಿಯೇ ತಪ್ಪು ತಿಳಿಯಬೇಡ ನನ್ನ
೨. 'ಇದುವೇ ಸದ್ಮಾ'
ಮೊದ್ಲು, ಅವಳು ನನ್ನ ನೋಡಿ 'ಕಿಸ ಕಿಸ ಕಿಸಕ್' ಅಂತ ನಗ್ತಿದ್ಲು
ಆಗೆಲ್ಲ ನನ್ನ ಕಣ್ಣಿಗೆ ಫುಲ್ ಬೆಳದಿಂಗಳು
ಒಮ್ಮೆ ಫೋನ್ ಮಾಡಿ ಕರೆದಳು
ನಾ ಹೋಗ್ದೆಯಿರ್ತಿನಾ ?
ಲಗ್ನಪತ್ರ ಕೈಗಿಟ್ಟು ಮತ್ತೆ 'ಕಿಸಿ ಕಿಸಿ ಕಿಸಕ್' ಅಂತ ನಕ್ಕಳು
ನನ್ನ ಕಣ್ಣ ಮುಂದೆ ಅಮಾವಾಸ್ಯೆ ಕತ್ಲು
ಹೇಳ್ದೆ ಕೇಳ್ದೆ ಶೋಕಗೀತೆಯ ಕೋರಸ್ ಶುರುವಾತು :
'ಇದು ಸದ್ಮಾ . . . ಇದುವೇ ಸದ್ಮಾ,
ನಿನಗ್ಯಾಕ ಬೇಕಾಗಿತ್ತು ಈ ಉಸಾಬರಿ ತಮ್ಮಾ . . . '
೩. 'ಶೀಟ್ ಮ್ಯಾನ್'
ಬೆಳಗಾದ ಮೇಲೂ ಅವಳು,
ರಾತ್ರಿ ಕೊಟ್ಟ ಮುತ್ತಿನ ಗಮ್ಮತ್ತು ಇನ್ನೂ ಇತ್ತು-ಇಸ್ ಇಟ್ ? ಅಬ್ಬೋ
ಹಾಲು ಕರಿಯಲು,
ಕೊಟ್ಟಿಗೆಯತ್ತ ಹೋದೆ ತೂರಾಡುತ ಅಮಲಿನಲ್ಲಿ, ಮುತ್ತಿನ ಅಮಲಿನಲ್ಲಿ
ಲಿಪ್ಪಿಸ್ಟಿಕ್ಕಿನ ಕೆಂಪು ತುಟಿಗಳ ಗುರುತು ಇನ್ನೂ ಇತ್ತು - ಆಹಾ ಕಳ್ಳ, ಬರೀ ಮುತ್ತಿಗೆ ಟೈಟಾದ್ರೆ ಹೆಂಗೆ ?
ನೀರು ಚಿಮುಕಿಸಿ ಹಸುವಿನ ಕೆಚ್ಚಲಿಗೆ ಕೈಹಾಕುವ ಮುನ್ನವೂ,
ನನ್ನಲ್ಲಿ ಮುತ್ತಿನ ಮತ್ತೇ ಇತ್ತು - ಇದ್ಯಾಕೋ ಸ್ವಲ್ಪ ಜಾಸ್ತಿಯಾಯ್ತು.
ಕೆಚ್ಚಲಿಗೆ ಕೈಹಾಕಿದ ಕ್ಷಣಾರ್ಧದಲ್ಲಿ ಕಂಡವು ನಕ್ಷತ್ರ - ಬೆಳಗ್ಗೆ ನಕ್ಷತ್ರಗಳಾ? ಏನಾಯ್ತು?
ಕೆಚ್ಚಲಿಗೆ ಕೈಹಾಕಿದವನಿಗೆ ಹಾಲು ಸಿಗಲಿಲ್ಲ, ಅಸಲಿಗೆ ಕೆಚ್ಚಲಿದ್ದರೆ ತಾನೇ !!
ಮುತ್ತಿನ ಗುಂಗಿನಲ್ಲಿ ನಾನು ಅದರ ಲಿಂಗ ಭೇದ ಮಾಡಿದನಲ್ಲನೆಂಬ ಸಿಟ್ಟಿನಲ್ಲಿ ಝಾಡಿಸಿ ಒದ್ದುಬಿಟ್ಟಿತಲ್ಲ 'ಎತ್ತು' - ಶೀಟ್ ಮ್ಯಾನ್
=====
=====
May 21, 2011
ಏಕಾಂತದಲ್ಲಿ ಅವಳ ಮುಂದೆ ಹಾಡಬೇಕೆಂದು
ಹೂವು, ಚಂದ್ರ, ಮಳೆ, ತಂಗಾಳಿ - ಎಲ್ಲವನ್ನ ಪೋಣಿಸಿ
ಇಷ್ಟಪಟ್ಟು, ಪ್ರೀತಿಯಿಂದ ಒಂದು ಪದ ಕಟ್ಟಿದ್ದೆ.
ಆಗ,
ಹಾಡಲು ಒಂದೇ ಒಂದು ಅವಕಾಶ ಕೊಡಲಿಲ್ಲ; ಆಕೆ.
ನಾನು ಪ್ರಯತ್ನಿಸಿದೆನಾದರು, ನಾನೂ ಸುಮ್ಮನಾಗಿಬಿಟ್ಟೆ
ಕಾಲಪಲ್ಲಟಕ್ಕೆ ಯಾರ ಹಂಗು - ನನ್ನದಾ ? ಅವಳದಾ?
ಚಲಿಸುತ್ತಲೇ ಬಂತು, ನಿಲ್ಲಿಸಲು ನಾನು ಪ್ರಯತ್ನಿಸಲಿಲ್ಲ
**
ಅನಿರೀಕ್ಷಿತವಾಗಿ ಎದುರಿಗೆ ಬಂದು ನಿಂತಿದ್ದಾಳೆ,
ಅವಳಲ್ಲಿ ನಿಶ್ಯಬ್ದಕ್ಕಿಂತ ಮೆಲು ಮಾತು - ಮತ್ತೇನು ಉಳಿದಿಲ್ಲ
ಈಗ,
ಕಷ್ಟಪಟ್ಟರೂ, ಯಾಕೋ ಒಂದು ಸಾಲು ನೆನಪಾಗುತ್ತಿಲ್ಲ,
ಮರೆತ ಮಾತನ್ನ ಕೆದಕುವ ಪುರಸೊತ್ತು ನನಗಿಲ್ಲ.
ನಿಜ - ನಾನು ಒಮ್ಮೆ ಪದ ಕಟ್ಟಿದ್ದೆ.
=====
=====
May 2, 2011
"ಕಾವ್ಯ , ಅಮೃತ ಮತ್ತು ಗರುಡ"
ಯಾವುದೇ ಆದರೂ, ಅದನ್ನ ನೋಡುವಾಗ ನೋಡುಗನ ಮನಸ್ಥಿತಿ ಮತ್ತು ಅನುಭವ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ಹುಡುಗಿಯನ್ನ ಬೇರೆ ಬೇರೆ ಹುಡುಗರು ಬೇರೆ ಬೇರೆ ಆದ ರೀತಿಯಲ್ಲಿ ವರ್ಣಿಸುತ್ತಾರೆ - ಅದೆಷ್ಟು ಸತ್ಯ, ಸುಳ್ಳು; ಆ ಮಾತು ಬ್ಯಾರೆ.
ಒಂದೇ ವಸ್ತುವಿನ ಬಗ್ಗೆ ಬೇರೆ ಬೇರೆ ಕವಿಗಳು, ಸಾಹಿತಿಗಳು ಬೇರೆ ಬೇರೆಯದೆ ರೀತಿಯಲ್ಲಿ ಬರೆಯುತ್ತಾರೆ. ಅವುಗಳಲ್ಲಿ ಯಾರದು ಎಷ್ಟು ನಿಜ ಅನ್ನುವುದಕ್ಕಿಂತ - ಅದು ಅವರು ಕಂಡುಕೊಂಡ ಸತ್ಯ ಅಷ್ಟೇ. ಓದಿದ ಮೇಲೆ ಯಾವುದು ನಮ್ಮಲ್ಲಿ ಹರಳುಗಟ್ಟಿ ನಿಲ್ಲುತ್ತದೆಯೋ ಅದು ನಮಗೆ ಹತ್ತಿರವಾದ ಸತ್ಯ. ಕನ್ನಡದಲ್ಲಿ 'ಕವಿತೆ' ಅನ್ನೋ ಪದ 'ಬೇಂದ್ರೆ' ಅನ್ನೋ ಹೆಸರನ್ನ ಥಟ್ಟಂತ ಸೂಚಿಸಿಹೊಗುವಷ್ಟರಮಟ್ಟಿಗೆ ಬೇಂದ್ರೆ ಅವರ ಬರಹ, ಬದುಕು ಎರಡು ದೊಡ್ಡವು.
ಶ್ರೀಕೃಷ್ಣ ಆಲನಹಳ್ಳಿ, ಕನ್ನಡದ ಮತ್ತೊಬ್ಬ ಪ್ರತಿಬಾವಂತ ಬರಹಗಾರ. ಆತ ಬದುಕನ್ನ ತುಂಬಾ ತೀವ್ರವಾಗಿ ಬದುಕಿದ ಅಂತಾರೆ. ಅವರ ಎಲ್ಲ ಪುಸ್ತಕಗಳೂ ಮಲಯಾಳಂ ಭಾಷೆಗೆ ಅನುವಾದಗೊಂಡಿವೆ - ಕೇರಳದವರು ಸುಲಭವಾಗಿ ಬೇರೆ ಭಾಷೆಯವರನ್ನ ಒಪ್ಪಲ್ಲ. ಶ್ರೀಕೃಷ್ಣ ಅವರು ಹಟಕ್ಕೆ ಬಿದ್ದು ಬರೀತಾಯಿದ್ರಂತೆ. ಆತ ಹತ್ತಿರವಾಗಿದ್ದು ತನ್ನ ಕೃತಿಗಳಲ್ಲಿ ಬಾಲ್ಯವನ್ನ ಕಟ್ಟಿಕೊಟ್ಟ ರೀತಿಯಿಂದ - ಆತನ ಶೈಲಿಯೇ ಬೇರೆ. ರಾಜಕಿಯವಾಗಿಯು ತಕ್ಕಮಟ್ಟಿಗೆ ತಮ್ಮನ್ನು ತೊಡಗಿಕೊಂಡಿದ್ದ ಶ್ರೀಕೃಷ್ಣ ಆಲನಹಳ್ಳಿಯವರ ಅಕಾಲಿಕ ಮರಣ ಕನ್ನಡ ಸಾಹಿತ್ಯ ವಲಯದಲ್ಲಿ ನಷ್ಟವೇ ಸರಿ.ಬೇಂದ್ರೆ ಅವರ 'ಬೆಳಗು'
ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೊಯ್ದ
ನುಣ್ಣನೆ ಎರಕಾವ ಹೊಯ್ದ
ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲ ತೊಯ್ದ
ಎಲೆಗಳ ಮೇಲೆ, ಹೂಗಳ ಒಳಗೆ ಅಮೃತದಾ ಬಿಂದು
ಕಂಡವು ಅಮೃತದಾ ಬಿಂದು
ಯಾರಿರಿಸಿಹರು ಮುಗಿಲಿನ ಮೇಲಿನ ಇಲ್ಲಿಗೆ ಇದ ತಂದು.
ಶ್ರೀಕೃಷ್ಣ ಅವರ 'ಬೆಳಗು'
ಇರುಳ ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ
ಸೂರ್ಯ: ಜಿಬುರೆಗಣ್ಣೋರಸುತ್ತಾಕಳಿಸಿ
ಕೊಬ್ಬಿದಾದು , ಕುರಿ , ಕೋಳಿ ಸಿಗಿದು ಸೀಳಿ
ಕಂದು , ನೀಲಿ , ಬಿಳಿ , ಕೆಂಪು ಖಂಡಗಳ ತೂಗಿತ್ತು
ಬಣ್ಣ ಬಣ್ಣದ ಮೂಡಣದ ಮಾಂಸದಂಗಡಿ ತೆರೆದಾಗ
ನನ್ನೂರಿನಲ್ಲಿ ಬೆಳಗಾಯಿತು.ಬೇಂದ್ರೆ ಅವರ ಅಮೃತದಾ ಬಿಂದು, ಶ್ರೀಕೃಷ್ಣ ಅವರ ಮಾಂಸದಂಗಡಿ ಕಂಡದ್ದು ಬೆಳಗಿನಲ್ಲಿ ಅನ್ನೋದು ಸತ್ಯ.
ನಿಮ್ಮ ಸತ್ಯ ನಿಮ್ಮೊಳಗಿದೆ ಅದೂ ಸತ್ಯವೇ.
(
ಶ್ರೀಕೃಷ್ಣ ಅವರ 'ಊಟಕ್ಕೆ ಕೂತಾಗ' ಈಗಾಗಲೇ ಒಮ್ಮೆ ಪೋಸ್ಟ್ ಮಾಡಿದ್ದೆ: http://pennupaper.blogspot.com/search?updated-min=2010-01-01T00%3A00%3A00-08%3A00&updated-max=2011-01-01T00%3A00%3A00-08%3A00&max-results=35 )